ಕನ್ನಡದ ಹಾಡು ಹಾಡಿ ರಶ್ಮಿಕಾ ಮಂದಣ್ಣಗೆ ಉಗಿದ ಪೂಜಾ ಗಾಂಧಿ

ಪ್ರೀಯ ಮಿತ್ರರೆ, ಇತ್ತಿಚೆಗೆ ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರು ನಾನು ಹೈದರಾಬಾದ್ ನವಳು ಎಂದು ಹೊಸ ವಿವಾದಾತ್ಮಕ ಹೇಳಿಕೆ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದರು. ಹೌದು, ಈ ರಶ್ಮಿಕಾ ಮಂದಣ್ಣ ಅವರು ಈ ರೀತಿ ಹೇಳುವುದಕ್ಕೆ ಒಂದು ಕಾರಣ ಕೂಡ ಇದೆ.
ಸುಮಾರು ತಿಂಗಳ ಹಿಂದೆ ರಿಷಭ್ ಶೆಟ್ಟಿ ಅವರು ರಶ್ಮಿಕಾ ಅವರನ್ನು ಕಿರಿಕ್ ಪಾರ್ಟಿ ಯಶಸ್ಸಿನ ಸಂಭ್ರಮಾಚರಣೆ ಸಮಯದಲ್ಲಿ ಕಿರಿಕ್ ಪಾರ್ಟಿ ಬ್ಯಾನರ್ ನಲ್ಲಿ ರಶ್ಮಿಕಾ ಅವರ ಫೋಟೋ ತೆಗೆಸಿದ್ದರು. ತದನಂತರ ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೂ ಆಯಿತು. ಇದಾದ ನಂತರ ರಶ್ಮಿಕಾ ಅವರು ಕನ್ನಡ ಸಿನಿಮಾದಲ್ಲಿ ಅಷ್ಟೊಂದು ಉತ್ಸಾಹ ಕೂಡ ತೋರಿಸಿಲ್ಲ.
ತದನಂತರ, ಪುಷ್ಪ 2 ಹಿಟ್ ಕೊಟ್ಟ ಬಳಿಕ ಹೈದರಾಬಾದ್ ನಲ್ಲಿ ರಶ್ಮಿಕಾ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ನೆರೆದಿದ್ದರು. ಈ ಕಾರ್ಯಕ್ರಮದಲ್ಲಿ ತನ್ನ ಯಶಸ್ಸಿನ ಬಗ್ಗೆ ಭಾವುಕರಾಗಿ ನಾನು ಹೈದರಾಬಾದ್ ನವಳು ಎಂದು ಎದೆ ತಟ್ಟಿ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ಇನ್ನು ಕನ್ನಡಿಗರನ್ನು ಕಡೆಗಣಿಸಿದ ರಶ್ಮಿಕಾಗೆ ಸೆಡ್ಡು ಹೊಡೆದಂತೆ ಪೂಜಾ ಗಾಂಧಿ ಅವರು ಕನ್ನಡದ ಹಾಡು ಹಾಡಿ ಕನ್ನಡಗರ ಹೃದಯ ಗೆದ್ದಿದ್ದಾರೆ.